ಆಸೆಯೇ ಅನಂತ (Asaeye Anantha, Kannada Edition)
ಆಸೆಯೇ ದುಃಖಕ್ಕೆ ಮೂಲ ಎಂದು ಗೌತಮ ಬುದ್ಧ ಹೇಳಿದನೆಂದು ಜನ ನಂಬುತ್ತಾರೆ. ಆದರೆ ಆಸೆಗಳನ್ನು ಬಿಡಬೇಕು ಎನ್ನುವುದೂ ಒಂದು ಆಸೆ ತಾನೆ! ಆಸೆ-ಬಯಕೆಗಳಿಲ್ಲದೆ ಬದುಕೇ ಸಾಧ್ಯವಿಲ್ಲ. ಆಸೆಗಳನ್ನೇ ಬಿಟ್ಟುಬಿಡುವುದು ಮರಣಕ್ಕೆ ಸಮಾನ, ಜೀವನಕ್ಕೆ ವಿರುದ್ಧವಾದುದು ಎಂಬುದು ಸದ್ಗುರುಗಳ ವಿಚಾರ.
200.00₹ Original price was: 200.00₹.150.00₹Current price is: 150.00₹.
Weight | 300 g |
---|---|
Brand |
ನಮ್ಮ ಬದುಕಿನಲ್ಲಿ ಉದ್ಭವಿಸುವ ಎಲ್ಲ ಹಿರಿಯ-ಕಿರಿಯ ದುಃಖ ದುಮ್ಮಾನಗಳಿಗೆ ನಮ್ಮ ಆಸೆಗಳೇ ಕಾರಣ, ಆದುದರಿಂದ ನಾವು ಆಸೆಗಳನ್ನು ಬಿಡಬೇಕು ಎಂದು ಅನೇಕ ಮತಧರ್ಮಗಳು ಹೇಳುತ್ತಾ ಬಂದಿವೆ. ಈ ಅಭಿಪ್ರಾಯ ಎಷ್ಟರಮಟ್ಟಿಗೆ ಬೇರೂರಿದೆಯೆಂದರೆ, ಆಸೆಗಳನ್ನು ಬಿಟ್ಟುಬಿಡುವುದೇ ಒಂದು ಮಹತ್ಸಾಧನೆ ಎನ್ನುವಂತಾಗಿದೆ. ಆಸೆಯೇ ದುಃಖಕ್ಕೆ ಮೂಲ ಎಂದು ಗೌತಮ ಬುದ್ಧ ಸಾರಿಹೇಳಿದನೆಂದೂ ಜನ ನಂಬುತ್ತಾರೆ.
ಇದಕ್ಕೆ ಸದ್ಗುರುವಿನ ಪ್ರತಿಕ್ರಿಯೆ – “ಆಸೆಯೇ ದುಃಖಕ್ಕೆ ಮೂಲ” ಎಂಬಂತಹ ತಿಳಿಗೇಡಿತನದ ಮಾತನ್ನು ಗೌತಮ ಬುದ್ಧನು ಹೇಳಿರಲು ಸಾಧ್ಯವಿಲ್ಲ. ಆಸೆಗಳನ್ನು ಬಿಡಬೇಕು ಎನ್ನುವುದೂ ಒಂದು ಆಸೆ ತಾನೆ! ಆಸೆ-ಬಯಕೆಗಳಿಲ್ಲದೆ ಬದುಕೇ ಸಾಧ್ಯವಿಲ್ಲ. ಆಸೆಗಳನ್ನೇ ಬಿಟ್ಟುಬಿಡುವುದು ಮರಣಕ್ಕೆ ಸಮಾನ, ಜೀವನಕ್ಕೆ ವಿರುದ್ಧವಾದುದು ಎನ್ನುತ್ತಾರೆ ಸದ್ಗುರು.
ಸದ್ಗುರುವಿನ ಅಭಿಮತ – ಆಸೆಗಳನ್ನು ಇರಿಸಿಕೊಳ್ಳಿ, ಆದರೆ ಇದರಲ್ಲಿ ಕಂಜೂಸ್ತನ ಬೇಡ, ಎಲ್ಲದಕ್ಕೂ ಆಸೆಪಡಿ. ಆಸೆಗಳನ್ನೂ ಇಡೇರಿಸಿಕೊಳ್ಳುವ ಪ್ರಯತ್ನದಲ್ಲಿ ಬೆಳೆಯಿರಿ. ಬೆಳೆಯುತ್ತಾ ಆಸೆಗಳನ್ನು ವಿಸ್ತರಿಸುತ್ತಾ ,ವಿಸ್ತರಿಸುತ್ತಾ ಅನಂತವನ್ನೇ ಆಶಿಸಿ. ಈ ಆಸೆಯನ್ನು ಈಡೇರಿಸಿಕೊಳ್ಳುವುದೇ ಜೀವನ. ಆಸೆಯೇ ಅನಂತ.
ಸದ್ಗುರುವಿನ ಈ ವಿಚಾರಧಾರೆ ಮೊದಲಬಾರಿಗೆ ತಮಿಳಿನ ‘ಆನಂದ ವಿಕಟನ್’ ವಾರಪತ್ರಿಕೆಯಲ್ಲಿ ನಾಲ್ಕು ವರ್ಷ ಕಾಲ ಜನಪ್ರಿಯ ಧಾರಾವಾಹಿಯಾಗಿ ಮೂಡಿಬಂದಿತು. ನಂತರ ಕನ್ನಡದ ಸುಧಾ ವಾರಪತ್ರಿಕೆಯಲ್ಲೂ ಪ್ರಕಟವಾಯಿತು. ಅದನ್ನು ಇಲ್ಲಿ ಪುಸ್ತಕ ರೂಪದಲ್ಲಿ ಪ್ರಸ್ತುತಗೊಳಿಸಲಾಗಿದೆ.
You have recently viewed
Related products
250.00₹Original price was: 250.00₹.88.00₹Current price is: 88.00₹.250.00₹Original price was: 250.00₹.88.00₹Current price is: 88.00₹.1,200.00₹Original price was: 1,200.00₹.500.00₹Current price is: 500.00₹.2,500.00₹Original price was: 2,500.00₹.1,900.00₹Current price is: 1,900.00₹.400.00₹Original price was: 400.00₹.176.00₹Current price is: 176.00₹.